ಹಾಲುಮತ ಹಿರಿಯರ ಸಲಹಾ ಸಮಿತಿ ಮತ್ತು ಜಿಲ್ಲಾ ಕುರುಬರ ಸಂಘದಿಂದ ಸಚಿವ ಸಿ ಎಸ್ ಶಿವಳ್ಳಿ ಯವರಿಗೆ ಶ್ರದ್ಧಾಂಜಲಿ.... C.s shivali#vijaypura....

Sat, Mar 23, 2019

ವಿಜಯಪುರ: ಜಿಲ್ಲಾ ಕುರುಬರ ಸಂಘ ಹಾಗೂ ಹಾಲುಮತ ಸಮಾಜದ ಹಿರಿಯರ ಸಲಹಾ ಸಮಿತಿ ವತಿಯಿಂದ ಇಂದು ನಗರದ ಗಾಂಧಿ ವೃತ್ತದಲ್ಲಿ ಪೌರಾಢಳಿತ ಸಚಿವ ಸಿ.ಎಸ್.ಶಿವಳ್ಳಿ ಯವರಿಗೆ ಶ್ರದ್ಧಾಂಜಲಿ  ಅರ್ಪಿಸಿದರು.

ಈ ಸಂದರ್ಭದಲ್ಲಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸಿದರು.


ಈ ಸಂದರ್ಭದಲ್ಲಿ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷರಾದ ಶ್ರೀ ಮಲ್ಲಣ್ಣ.ಶಿರಶ್ಯಾಡ, ಹಾಗೂ ಹಾಲುಮತ ಸಮಾಜದ ಹಿರಿಯರ ಸಲಹಾ ಸಮಿತಿ ಅಧ್ಯಕ್ಷರಾದ ಶ್ರೀ ಅಶೋಕ ತಿಳಗೂಳಕರ  ನಗರ ಘಟಕದ ರಾಜು ಕಗ್ಗೊಡ ಸಮಾಜದ ಪ್ರಮುಖರು ಭಾಗವಹಿಸಿದ್ದರು.

Like our news?