ನಾಳೆಯಿಂದ 3 ದಿನಗಳ ಕಾಲ ಬಬಲಾದಿ ಸದಾಶಿವ ಮುತ್ಯಾನ ಜಾತ್ರೆ ; ಸದಾಶಿವ ಮುತ್ಯಾನಿಗೆ ಮದ್ಯವೇ ನೈವೇದ್ಯ..! #Vijayapur #Bubaldi #Jatre #Drinks

Fri, Mar 12, 2021


ವಿಜಯಪುರ : ಜಿಲ್ಲೆಯ ಬಬಲೇಶ್ವರ ತಾಲೂಕಿನ ಬಬಲಾದಿ ಗ್ರಾಮದಲ್ಲಿರುವ ಚಂದ್ರಗಿರಿ ಮೂಲ ಮಹಾ ಸಂಸ್ಥಾನ ಮಠದ ಶ್ರೀ ಗುರು ಚಕ್ರವರ್ತಿ ಸದಾಶಿವ ಮುತ್ಯಾನ ಜಾತ್ರೆ ಮಾರ್ಚ 13 ರಿಂದ ಮೂರು ದಿನಗಳ ಕಾಲ ನಡೆಯಲಿದೆ , ಪ್ರತಿ ವರ್ಷ 5 ದಿನಗಳ ಕಾಲ ನಡೆಯುತ್ತಿತ್ತು ಆದರೆ ಈ ಬಾರಿ ಕೊವಿಡ್ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ನಡೆಯಲಿದೆ.


ಸದಾಶಿವ ಮುತ್ಯಾನ ಜಾತ್ರೆ ವಿಶೇಷ...

ಬಬಲಾದಿ ಸದಾಶಿವ ಮುತ್ಯಾನ ಜಾತ್ರೆ ಎಂದರೆ ಮೊದಲು ನೆನಪಾಗೋದೆ ಮದ್ಯದ ಜಾತ್ರೆ ಎಂದು , ಯಾಕೆಂದರೆ ಬಬಲಾದಿ ಸದಾಶಿವ ಮುತ್ಯಾನಿಗೆ ಭಕ್ತರು ಮದ್ಯವನ್ನು ನೈವೇದ್ಯವಾಗಿ ಅರ್ಪಿಸುವ ಮತ್ತು ಮದ್ಯವನ್ನೇ ಪ್ರಸಾದವಾಗಿ ಸ್ವೀಕರಿಸುವ ಸಂಸ್ಕೃತಿ ಬಹುವರ್ಷಗಳಿಂದ ನಡೆದು ಬಂದಿದೆ ಈ ಹಿನ್ನಲೆಯಲ್ಲಿ ಸಾವಿರಾರು ಭಕ್ತರು ಸಹ ರಾಜ್ಯದ ಎಲ್ಲಾ ಭಾಗಗಳಿಂದ ಆಗಮಿಸುತ್ತಾರೆ...


ಜಾತ್ರೆಯಂದು ಕಾಲಜ್ಞಾನ ನುಡಿಯುವ ಮಠದ ಪೀಠಾಧಿಪತಿ  ಸಿದ್ರಾಮಯ್ಯ ಹೊಳಿಮಠ...

ವರ್ಷಾನು ವರ್ಷಗಳಿಂದ ಬಬಲಾದಿ ಮಠದ ಕಾಲಜ್ಞಾನ ಯಾವತ್ತೂ ಸುಳ್ಳಾಗಿಲ್ಲ , ಮತ್ತು ರಾಜ್ಯದ ಗಮನ ಸೆಳದಿದೆ,  ಮಳೆ-ಬೆಳೆ , ರೋಗ-ರುಜನೆ , ಪ್ರಚಲಿತ ವಿದ್ಯಮಾನಗಳು ಮತ್ತು ರಾಜಕೀಯ ವಲಯದ ಬೆಳವಣಿಗೆ ಕುರಿತು ಸಾವಿರಾರು ವರ್ಷಗಳ ಹಿಂದೆಯೇ ಕರಿಕಲ್ಲಿನ ಬಿಳಿಗೆರೆಯ ಮೇಲೆ ಬರೆದಿಡಲಾಗಿದೆಯಂತೆ ಅದರಂತೆ ಪ್ರತಿ ವರ್ಷ ಜಾತ್ರೆಯ ಸಮಯದಲ್ಲಿ ಮಠದ ಈಗಿನ ಪೀಠಾಧಿಪತಿ ಸಿದ್ರಾಮಯ್ಯ ಕಾಲಜ್ಞಾನ ನುಡಿಯುತ್ತಾರೆ.


Like our news?