ಉ.ಪ್ರದೇಶ : ಲಕ್ನೋದಲ್ಲಿ ಇದೇ ತಿಂಗಳಲ್ಲಿ ಸರಣಿಯಾಗಿ ಹಿಂದೂ ನಾಯಕರ ಹತ್ಯೆ ನಡೆಯುತ್ತಿದ್ದು, ಈ ತಿಂಗಳಲ್ಲಿ ನಡೆದ ನಾಲ್ಕನೇ ಹತ್ಯೆ ಇದಾಗಿದೆ. ಅ.8ರಂದು ಬಿಜೆಪಿಯ ಚೌದರಿ ಯಶ್ಪಾಲ್ ಸಿಂಗ್, ಅ.10ರಂದು ಬಿಜೆಪಿ ನಾಯಕ ಕಬೀರ್ ತಿವಾರಿ ಯನ್ನು ಬಸ್ತಿಯಲ್ಲಿ ಹತ್ಯೆ ಮಾಡಲಾಗಿತ್ತು. ಅ.13ರಂದು ಬಿಜೆಪಿ ಕಾರ್ಪೊರೇಟರ್ ಧಾರಾ ಸಿಂಗ್ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಇದೀಗ ಹಿಂದೂ ಮಹಾಸಭಾ ಅಧ್ಯಕ್ಷ ಕಮಲೇಶ್ ತಿವಾರಿಯನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ.
ಇತ್ತೀಚೆಗೆ ತಿವಾರಿ ಪ್ರವಾದಿ ಮೊಹಮ್ಮದ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿತ್ತು. ಆದರೆ ಇಂದು ತಿವಾರಿ ಗೃಹ ಕಛೇರಿಗೆ ಸ್ವೀಟ್ ಬಾಕ್ಸ್ ನೊಂದಿಗೆ ಬಂದ ಇಬ್ಬರು , ಸಿಹಿ ತಿನಿಸೋ ನೆಪದಲ್ಲಿ ಬಾಕ್ಸ್ ನಲ್ಲಿದ್ದ ಗನ್ನಿಂದ ಶೂಟ್ ಮಾಡಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
Sign up here to get the latest post directly to your inbox.